ಶಾಹಿ ಎಕ್ಸ್‍ಪೋಟ್ರ್ಸ್ ಪ್ರೈ ಲಿ.

Key Buyers: Columbia Sportswear
Country: India
Last updated: 2021

2021

ಏಪ್ರಿಲ್ 2020 ರಲ್ಲಿ, ಭಾರತದ ಅತಿ ದೊಡ್ಡ ಉಡುಪು ಉತ್ಪಾದನಾ ಕೇಂದ್ರಗಳಲ್ಲಿ ಒಂದಾದ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ ವೇತನ ಹೆಚ್ಚಳ ಜಾರಿಗೆ ಬಂದಿತು. ಪ್ರಮುಖ ಉಡುಪು ಬ್ರಾಂಡ್ಗಳಿಗೆ ಉತ್ಪಾದಿಸುವ ಕಾರ್ಖಾನೆಯ ಮಾಲೀಕರು ಪಾವತಿಸಲು ನಿರಾಕರಿಸಿದರು. ಪರಿಣಾಮವಾಗಿ, ಒಂದು ಸಾವಿರಕ್ಕೂ ಹೆಚ್ಚು ಕಾರ್ಖಾನೆಗಳಲ್ಲಿನ 400,000 ಉಡುಪು ಕಾರ್ಮಿಕರನ್ನು ಕಾನೂನುಬದ್ಧ ಕನಿಷ್ಠ ವೇತನದಿಂದ ವಂಚಿಸಲಾಯಿತು.

ಇದು ಜಾಗತಿಕ ಉಡುಪು ಉದ್ಯಮದಲ್ಲಿ ಡಬ್ಲ್ಯುಆರ್ ಸಿ ದಾಖಲಿಸಿದ ಅತ್ಯಂತ ಕೆಟ್ಟ ವೇತನ ಕಳ್ಳತನವಾಗಿದೆ. ಬಟ್ಟೆ ಬ್ರ್ಯಾಂಡ್ಗಳು ಕಳ್ಳತನದ ಬಗ್ಗೆ ತಿಳಿದಿದ್ದವು ಮತ್ತು ಅದನ್ನು ಸುಮಾರು ಎರಡು ವರ್ಷಗಳ ಕಾಲ ಮುಂದುವರಿಸಲು ಅವಕಾಶ ಮಾಡಿಕೊಟ್ಟವು. ಜನವರಿ 2022 ರ ಹೊತ್ತಿಗೆ, WRC ಲೆಕ್ಕಾಚಾರಗಳ ಪ್ರಕಾರ, ಕಾರ್ಖಾನೆಗಳು ಒಟ್ಟಾರೆಯಾಗಿ ಕಾರ್ಮಿಕರಿಗೆ $ 58 ದಶಲಕ್ಷಕ್ಕಿಂತ ಹೆಚ್ಚು ಹಣವನ್ನು ನೀಡಬೇಕಾಗಿತ್ತು.

2022 ರ ಫೆಬ್ರವರಿ ಆರಂಭದಲ್ಲಿ – ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್ (GATWU) ಯಿಂದ ಯಶಸ್ವಿ ಮೊಕದ್ದಮೆಯ ನಂತರ, WRC ಯಿಂದ ಬ್ರ್ಯಾಂಡ್ಗಳೊಂದಿಗೆ ತಿಂಗಳುಗಳ ನಿಶ್ಚಿತಾರ್ಥದ ನಂತರ, ಮತ್ತು ಕಾರ್ಮಿಕ ಹಕ್ಕುಗಳ ವಕೀಲರ ಬೆಳೆಯುತ್ತಿರುವ ಪಟ್ಟಿ ತಮ್ಮ ಧ್ವನಿಯನ್ನು ಹೊತ್ತುಕೊಂಡ ನಂತರ – ಭಾರತದ ಅತಿದೊಡ್ಡ ಉಡುಪು ತಯಾರಕ, ಶಾಹಿ ರಫ್ತು, ಕರ್ನಾಟಕದಲ್ಲಿ ತನ್ನ 80,000 ಉದ್ಯೋಗಿಗಳಿಗೆ ಸರಿಯಾದ ಕನಿಷ್ಠ ವೇತನವನ್ನು ಪಾವತಿಸಲು ಪ್ರಾರಂಭಿಸುವುದಾಗಿ ಘೋಷಿಸಿತು. ಕಂಪನಿಯು ಪ್ರಸ್ತುತ ಮತ್ತು ಮಾಜಿ ಕಾರ್ಮಿಕರಿಗೆ ಎಲ್ಲಾ ಬಾಕಿಗಳನ್ನು ಪಾವತಿಸಲು ಸಹ ಬದ್ಧವಾಗಿದೆ. ಇತರ ಸರಬರಾಜುದಾರರು ಶೀಘ್ರದಲ್ಲೇ ಅನುಸರಿಸಿದರು.

2018

ಭಾರತದಲ್ಲಿ ಬೆಂಗಳೂರಿನಲ್ಲಿರುವ ಶಾಹಿ ಎಕ್ಸ್‍ಪೋಟ್ರ್ಸ್ ಪ್ರೈ ಲಿ. ನ ಯೂನಿಟ್ 8 ರಲ್ಲಿ ಕಾರ್ಮಿಕರು ತಮ್ಮ ಮೂಲಭೂತ ಕಾರ್ಮಿಕ ಹಕ್ಕುಗಳನ್ನು ಚಲಾಯಿಸಲು ಯತ್ನಿಸಿದಾಗ ಆಡಳಿತವರ್ಗವು ಅದನ್ನು ದಮನ ಮಾಡಲು ಅನೇಕ ಕ್ರಮಗಳನ್ನು ಅನುಸರಿಸಿದ್ದು WRC ಯು ನಡೆಸಿದ ತನಿಖೆಯಿಂದ ತಿಳಿದು ಬಂದಿತು. ಉತ್ತಮ ಕೆಲಸದ ವಾತಾವರಣವನ್ನು ಆಗ್ರಹಿಸಿ ಈ ಕಾರ್ಖಾನೆಯ ಕಾರ್ಮಿಕರು ಕರ್ನಾಟಕ ಗಾರ್ಮೆಂಟ್ ವರ್ಕರ್ಸ್ ಯೂನಿಯನ್ (KOOGU) ಮೂಲಕ ಸಂಘಟಿತರಾಗಿದ್ದರು. ಪರಿಣಾಮವಾಗಿ ಆಡಳಿತವರ್ಗವು ಅವರ ವಿರುದ್ಧ ದಮನಕಾರೀ ಕ್ರಮಗಳನ್ನು ಅನುಸರಿಸಿತ್ತು. ಈ ಕಾರ್ಖಾನೆಯು ಯೂನಿವಿರ್ಸಿಟಿ ಲೋಗೋಗಳನ್ನು ಒಳಗೊಂಡ ಬಟ್ಟೆಗಳನ್ನು ಕೊಲಂಬಿಯ ಸ್ಪೋಟ್ರ್ಸ್‍ವೇರ್, ಮತ್ತು Benetton, H&M, ಮತ್ತು Abercrombie & Fitch ಗಳಿಗೆ ಉತ್ಪಾದಿಸುತ್ತಿತ್ತು.

ಶಾಹಿಯು ಅಹುಜಾ ಕುಟುಂಬಕ್ಕೆ ಸೇರಿದ್ದು, ಭಾರತದ ಅತಿ ದೊಡ್ಡ ಗಾರ್ಮೆಂಟ್ ಉತ್ಪಾದಕ ಕಂಪನಿಯಾಗಿದೆ. 2018 ರಲ್ಲಿ ಕರ್ನಾಟಕದ ಗಾರ್ಮೆಂಟ್ಸ್ ಉದ್ಯಮಕ್ಕೆ ಸರ್ಕಾರವು ಪರಿಷ್ಕರಿಸಿ ಹೆಚ್ಚಿಸಿದ್ದ ಕನಿಷ್ಠವೇತನವನ್ನು ರದ್ದುಗೊಳಿಸುವಲ್ಲಿ ಈ ಕಂಪನಿಯು ಅತ್ಯಂತ ಯಶಸ್ವಿಯಾಗಿ ಲಾಬಿ ಮಾಡಿತ್ತು. 2018 ರ ಏಪ್ರಿಲ್‍ನಲ್ಲಿ WRC ಯು ಶಾಹಿ ಯೂನಿಟ್ 8 ರಲ್ಲಿ ತನಿಖೆಯನ್ನು ನಡೆಸಿತ್ತು. ಅದರ ಭಾಗವಾಗಿ ಸುಮಾರು 30 ಕಾರ್ಮಿಕರ ಸಂದರ್ಶನ ನಡೆಸಿತ್ತು. ಈ ತನಿಖೆಯಿಂದ ಶಾಹಿ ಎಕ್ಸ್‍ಪೋಟ್ರ್ಸ್, ಭಾರತದ ಕಾನೂನು, ಅಂತಾರಾಷ್ಟ್ರೀಯ ಕಾರ್ಮಿಕ ಮಾನಕಗಳನ್ನು ಉಲ್ಲಂಘಿಸಿದ್ದಲ್ಲದೆ ಯೂನಿವರ್ಸಿಟಿ ಮತ್ತು ಬ್ರಾಂಡ್‍ಗಳ ಕೋಡ್ ಆಫ್ ಕಾಂಡಕ್ಟ್‍ಗಳನ್ನೂ ಉಲ್ಲಂಘಿಸಿರುವುದು WRC ಗೆ ಕಂಡು ಬಂದಿತು. ಕಾರ್ಮಿಕರಿಗೆ ದೈಹಿಕವಾಗಿ ಹೊಡೆದಿದ್ದು, ಕೊಲೆ ಬೆದರಿಕೆ ಒಡ್ಡಿದ್ದು, ಲಿಂಗ, ಜಾತಿ ಮತ್ತು ಧರ್ಮಾಧಾರಿತ ತಾರತಮ್ಯ ಎಸಗಿದ್ದು, ಕಾರ್ಮಿಕರನ್ನು ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದು, ಜೊತೆಗೆ 15 ಕಾರ್ಮಿಕ ಕಾರ್ಯಕರ್ತರನ್ನು ಕೆಲಸದಿಂದ ತೆಗೆದುಹಾಕಿದ್ದು, ಈ ಎಲ್ಲ ಅನ್ಯಾಯದ ಕ್ರಮಗಳನ್ನು ಅನುಸರಿಸುವ ಮೂಲಕ ಶಾಹಿಯು ಕಾನೂನುಗಳ ಉಲ್ಲಂಘನೆ ಮಾಡಿತ್ತು.

WRC ಯು ಈ ತನಿಖಾವರದಿ ಹಾಗೂ ಶಿಫಾರಸುಗಳನ್ನು ಶಾಹಿ, ಕೊಲಂಬಿಯಾ ಸ್ಪೋಟ್ರ್ಸ್‍ವೇರ್ ಮತ್ತು ಇತರ ಬ್ರಾಂಡ್‍ಗಳೊಂದಿಗೆ ಹಂಚಿಕೊಂಡಿತು, ಅಷ್ಟೇ ಅಲ್ಲದೆ ಕೆಲಸದಿಂದ ತೆಗೆದುಹಾಕಿರುವ ಕಾರ್ಮಿಕರನ್ನು ಪುನ: ಕೆಲಸಕ್ಕೆ ತೆಗೆದುಕೊಳ್ಳಬೇಕು, ದೌರ್ಜನ್ಯದಲ್ಲಿ ನೇರವಾಗಿ ಭಾಗಿಯಾದ ಮ್ಯಾನೇಜರ್‍ಗಳನ್ನು ಕೆಲಸದಿಂದ ತೆಗೆದುಹಾಕಬೇಕು ಮತ್ತು ಯೂನಿಯನ್ ಅನ್ನು ತಕ್ಷಣವೇ ಮಾನ್ಯಮಾಡಬೇಕು ಎಂದು ಆಗ್ರಹಿಸಿತು. ಆರಂಭದಲ್ಲಿ ಶಾಹಿಯು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಕೊಂಡರೂ ಕಾರ್ಮಿಕರು ಸುರಕ್ಷಿತವಾಗಿ ಕಾರ್ಖಾನೆಗೆ ವಾಪಸ್ ಬರುವುದನ್ನು ಖಾತ್ರಿಪಡಿಸಲು ಮತ್ತು ಸಂಘಟನಾ ಸ್ವಾತಂತ್ರ್ಯವನ್ನು ಖಾತ್ರಿಪಡಿಸಲು ಒಪ್ಪಿಕೊಳ್ಳಲಿಲ್ಲ. ಶಾಹಿಯು ತನ್ನ ಅನ್ಯಾಯದ ನಡವಳಿಕೆಯನ್ನು ಅರ್ಥಪೂರ್ಣವಾಗಿ ಸರಿಪಡಿಸಿಕೊಳ್ಳಲು ವಿಫಲವಾಯಿತು. ಪರಿಣಾಮವಾಗಿ WRC ಯು ತನ್ನ ವರದಿಯನ್ನು ಸಾರ್ವಜನಿಕಗೊಳಿಸಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗುವಂತೆ ನೋಡಿಕೊಂಡಿತು. ಈ ಮೂಲಕ ಶಾಹಿ ಕಂಪನಿ ಮತ್ತು ಬ್ರಾಂಡ್‍ಗಳ ಮೇಲೆ ಒತ್ತಡ ತಂದಿತು. ಯೂನಿವರ್ಸಿಟಿಯೂ ತನಗಾಗಿ ಉತ್ಪಾದಿಸುವ ಕೊಲಂಬಿಯಾದ ಮೇಲೆ ಒತ್ತಡ ಹೇರುವಂತೆ ಮಾಡಿತು.

WRC ಯು ತನ್ನ ವರದಿಯನ್ನು ಬಿಡುಗಡೆ ಮಾಡಿ ಒತ್ತಡ ತಂದ ಪರಿಣಾಮವಾಗಿ, ಜೂನ್ 25 ರಂದು ಶಾಹಿ ಎಕ್ಸ್‍ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಯೂನಿಯನ್ ಅನ್ನು ಸಂಪರ್ಕಿಸಿ, ಒಂದು ಮೆಮೊರಾಂಡಮ್ ಆಫ್ ಅಂಡರ್‍ಸ್ಟಾಂಡಿಗೆ (MOU)ಗೆ ಸಹಿ ಹಾಕಿತು. ಈ MOU ನ ಮುಖ್ಯ ಅಂಶಗಳನ್ನು ಜೂನ್ ಕೊನೆಯ ಹೊತ್ತಿಗೆ ಯಶಸ್ವಿಯಾಗಿ ಜಾರಿಗೊಳಿಸಲಾಯಿತು. ದೈಹಿಕವಾಗಿ ಹಲ್ಲೆಗೊಳಗಾಗಿದ್ದ, ಕೊಲೆ ಬೆದರಿಕೆ ಎದುರಿಸಿದ್ದ, ಕೆಲಸದಿಂದ ತೆಗೆದುಹಾಕಿದ್ದ 15 ಕಾರ್ಮಿಕರನ್ನು, ಅವರಿಗೆ ಯಾವುದೇ ಸಮಸ್ಯೆಯಾಗದಂತೆ, ವೇತನದ ಹಿಂಬಾಕಿಯನ್ನೂ ಕೊಟ್ಟು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಲಾಯಿತು. ಈ ಕಾರ್ಮಿಕರು ಕೆಲಸಕ್ಕೆ ವಾಪಸ್ ಬಂದದ್ದನ್ನು WRC ಮತ್ತು ಬೈಯರ್ಸ್ ಅವರು ಗಮನಿದ್ದರು. ಶಾಹಿಯು ಯೂನಿಯನ್ ಅನ್ನು ಮಾನ್ಯ ಮಾಡಿದುದಲ್ಲದೆ ಅದರೊಂದಿಗೆ ನಿರಂತರವಾಗಿ ಮಾತುಕತೆಯಾಡುವುದಾಗಿ ಒಪ್ಪಿಕೊಂಡಿತು. ಜೊತೆಗೆ ದೌರ್ಜನ್ಯಕ್ಕೆ ಕಾರಣರಾದ, ಜವಾಬ್ದಾರರಾದ ಮ್ಯಾನೇಜರ್ ಹಾಗೂ ಸೂಪರ್‍ವೈಸರ್‍ಗಳನ್ನು ಕೆಲಸದಿಂದ ತೆಗೆದುಹಾಕಲು ಕ್ರಮ ಕೈಗೊಂಡಿತು.

Read More:

In the News:

Join our newsletter

Sign up to the WRC’s mailing list to stay updated on our work.

Related posts